Tuesday, October 27, 2009

ಗೀಚಿದ ಕವನ - ೧

ಸಮದರ್ಶಿ

ತಾನೊಂದು ಧರ್ಮವ ಪಾಲಿಸುತ್ತಿದ್ದು

ಗುಡಿ ಚರ್ಚ್ ಮಸೀದಿಗಳೆಲ್ಲವ ಕಂಡಾಗ

ವಿಚಲಿತನಾಗದೆ ದೇವರನ್ನು ಕಾಣುವವನೇ – ಸಮದರ್ಶಿ.


ಕರ್ಮ ಯೋಗಿ

ತನ್ನ ಕಡಿಯಲು ಕೊಡಲಿ ತಂದರೂ

ಬಿಸಿಲ ಝಳಕ್ಕೆ ನೆರಳನ್ನೀಯುತ್ತ

ಸಾಯುವ ಮರವೇ – ಕರ್ಮ ಯೋಗಿ.


ಆಸ್ಪತ್ರೆ

ಬಾಳಲ್ಲಿ ವಿಧಿಯಾಟ ನಡೆಯುವಾಗ

ಕಾಲದೊಂದಿಗೆ ಸೆಣಸಾಡುವ ಘಳಿಗೆಯಲ್ಲಿ

ಉಳ್ಳವರಿಗೆ ಮಾತ್ರ ಮೀಸಲಿಟ್ಟ ಸಂತೆ - ಆಸ್ಪತ್ರೆ