skip to main |
skip to sidebar
ಹಲವು
ಸಲ
ನಮಗೆ
ನಮ್ಮ
ಮೇಲೆ
ಅತಿಯಾದ
ವಿಶ್ವಾಸ
ಇರುತ್ತದೆ.
ಯಾರು
ಏನೇ
ಹೇಳಲಿ
ನಮ್ಮಲ್ಲಿ
ಸಿದ್ಧ
ಉತ್ತರ
ಬರುತ್ತದೆ.
ಏನು?
ಅಷ್ಟು
ಗೊತ್ತಿಲ್ವಾ
ನಮಗೆ?
ಅವನಿಂದ
ಕಲೀಬೇಕಾ?
ಎಂಬುದು.
ಬಹುಶಃ
ನಾವು
ಸ್ವಲ್ಪ
ಜಾಗರೂಕತೆಯಿಂದ
ವಾಸ್ತವತೆಯತ್ತ
ಗಮನ
ಹರಿಸಿದರೆ
ಎಷ್ಟೋ
ವಿಷಯಗಳ
ಸಮಾಧಾನ
ದೊರೆಯಬಹುದು.
ಉದಾಹರಣೆಗೆ
ಕೆಲವು
ದಿನಗಳ
ಹಿಂದೆ
ಓದಿದ
ಕಾಲಮ್ ನೆನಪಿಗೆ ಬರುತ್ತದೆ.
ನಮ್ಮ ಬಿ.
ಎಂ.
ಟಿ.
ಸಿ.
ಬಸ್
ನ
ಹಲವು
ಅಪಘಾತಗಳನ್ನು
ಗಮನಿಸಿದವರು
ಒಂದು
ಉತ್ತಮವಾದ
ಕಾರಣವನ್ನು
ನೀಡಿದ್ದಾರೆ.
ಅದೆಂದರೆ,
ಹಲವು
ಅಪಘಾತಗಳಿಗೆ
ಡ್ರೈವರ್
ಜವಾಬ್ದಾರನೇ
ಆಗಿರುವುದಿಲ್ಲ
ಎಂಬುದು.
ಆ
ಅಪಘಾತಗಳಲ್ಲಿ
ಹೆಚ್ಚಾಗಿ
ಬೇರೆ
ವಾಹನಗಳ
ಸವಾರರು
ಬಸ್
ನಿಂದ
ತಪ್ಪಿಸಿಕೊಳ್ಳಲು
ಹೋಗಿ,
ಡಿವೈಡರ್
ಗೆ
ಗುದ್ದಿ
ಬಸ್
ನ
ಚಕ್ರದಡಿಗೆ
ಬಿದ್ದಿರುತ್ತಾರೆ.
ಹಾಗಾಗಿ
ಡಿವೈಡರ್
ಹತ್ತಿರ
ಬಂದಾಗ
ಪ್ರತಿಯೊಬ್ಬರೂ
ಜಾಗರೂಕತೆಯಿಂದ ಇರುವುದು
ಅಗತ್ಯ.
ಕೆಲವು
ಸಲ
ನಮಗೆ
ನಮಗೆ
ಅಕ್ಕಪಕ್ಕದವರ
ಆಕ್ಸಿಡೆಂಟ್
ಕಥೆ
ಕೇಳಿದಾಗ
ನಗು
ಬರುವುದು
ಉಂಟು;
ಬೇಸರವಾಗುವುದು
ಉಂಟು.
ಹೀಗಾಗಿ
ಸರ್ವ
ಜನ
ಹಿತಕ್ಕಾಗಿ
ಕೆಲವು
ಅಪಘಾತಗಳ
ಬಗ್ಗೆ
ಹೇಳೋಣ
ಅನಿಸಿದೆ
ನನಗೆ.
ಇತ್ತೀಚೆಗೆ
ನನ್ನ
ಕೊಲೀಗ್
ಇದ್ದವಳು
ಹೇಳುತ್ತ
ಇದ್ದ
ಮಾತು
ನೆನಪಿಗೆ
ಬರುತ್ತಿದೆ.
ಹೈವೇಯಲ್ಲಿ
ಆರಾಮದಲ್ಲಿ
ಎಂಬತ್ತರ
ಮೇಲಿನ
ವೇಗದಲ್ಲಿ
ಹೋಗಬಹುದು
ಎನ್ನುವುದು
ಅವಳ
ವಾದ.
ಆಗ
ನನಗೆ
ಗೊತ್ತಿರುವವರಿಗೇ
ನಡೆದ
ಒಂದು
ಘಟನೆಯ
ಬಗ್ಗೆ
ಹೇಳಬೇಕೆನಿಸಿತು.
ನನಗೆ
ಗೊತ್ತಿರುವವರೊಬ್ಬರು,
ಕುಣಿಗಲ್
ಹತ್ತಿರ
ಬೈಕ್
ನಲ್ಲಿ
ಎಂಬತ್ತರ
ಮೇಲಿನ
ವೇಗದಲ್ಲಿ ಹೋಗುವಾಗ
ದನ
ಅಡ್ಡ
ಬಂದು
ಕಾಲಿಗೆ
ಸ್ಟೀಲ್
ರಾಡ್
ಹಾಕಿಸಿಕೊಂಡು
ಮೂರು
ತಿಂಗಳು
ಮನೆಯಲ್ಲೇ
ಮಲಗಿದ್ದರು.
ಹಾಗಾಗಿ
ಹೈವೇಯಲ್ಲಿ
ಹೋಗುವಾಗ
ದನ
ಮತ್ತು
ಅಡ್ಡ
ದಾರಿಗಳ
ಬಗ್ಗೆ
ಎಚ್ಚರ
ವಹಿಸುವುದು
ಅಗತ್ಯ.
ಬೆಂಗಳೂರಿನಲ್ಲಿ
ಸಣ್ಣ
ಗಲ್ಲಿಗಳಿಗೇನು
ಕಡಿಮೆ
ಇಲ್ಲ
ಬಿಡಿ.
ಬೆಂಗಳೂರಿನಲ್ಲಿ
ವೇಗಕ್ಕಿಂತ
ಹೆಚ್ಕ್ಚಾಗಿ
ಯಾವುದಾದರೂ
ವಾಹನ
ಬರಬಹುದೋ
ಏನೋ
ಎನ್ನುವ
ನಿರೀಕ್ಷೆ
ಬಹಳ
ಮುಖ್ಯ.
ಹಲವು
ಸಲ
ನನ್ನ
ಗೆಳೆಯರು
ಕಡಿಮೆ
ವೇಗದಲ್ಲಿಯೇ
ಹೋಗಿ
ಬಿದ್ದು
ಎದ್ದದ್ದಿದ್ದೆ :).
ಜೀವನದಲ್ಲಿ
ಬಿದ್ದವನಿಗಿಂತ
ಬೈಕಿನಿಂದ
ಬೀಳುವುದು
ಒಳಿತು
ಎನ್ನುವ
ವೇದಾಂತ
ಬಿಟ್ಟಿದ್ದು
ಇದೆ.
ಬೆಂಗಳೂರಿನಲ್ಲಿ
ರಾತ್ರಿ
ಸವಾರರದು
ಅಪಘಾತ ಕೇಳಲು
ಮಜ
ಇರುತ್ತದೆ. ಮಾರ್ಗ
ಬಹಳ
ಅಗಲವಿದೆ
ಎನ್ನುವ
ಖುಶಿಯಲ್ಲಿ ಗಾಡಿ ಓಡಿಸುವಾಗ ಲಗಾಮಿಲ್ಲದೆ ದಡಾರ್ ಅಂತ ಬಿದ್ದು
ಸ್ಟೀಲ್
ರಾಡ್
ಹಾಕಿಸಿಕೊಂಡವರಿಗೇನು
ಕಡಿಮೆ
ಇಲ್ಲ.
ಲಗಾಮಿಲ್ಲದ
ಕುದುರೆ
ಯಾವಾಗಲು
ಡೆಂಜರ್!!.
ಅಪಘಾತವಾಗಲು
ಕೇವಲ
ನಾವು
ಕಾರಣೀಭೂತರಾಗಬೇಕಿಲ್ಲ.
ನಮ್ಮ
ಎದುರಲ್ಲಿ
ಬರುವವನಿಂದಲೂ
ಆಗಬಹುದು.
ಹಾಗಾಗಿ
ಗಾಡಿಯ
ಲಗಾಮು
ಹಿಡಿದವನು
ಎಚ್ಚರದಿಂದಿರುವುದು
ಅಗತ್ಯ.
ಬಹುಶಃ
ನಾವು
ಕಲಿಯುವಾಗಲೇ
ಇಂತಹ
ವಿಷಯಗಳ
ಬಗ್ಗೆ
ಜಾಗ್ರತೆ
ವಹಿಸಿದರೆ
ಒಳಿತು
ಎನ್ನುವುದು
ನನ್ನ
ಭಾವನೆ.
ನನ್ನ
ಪತ್ನಿಗೆ
ವಾಹನ
ಬಿಡಲು
ಕಲಿಸುವಾಗ
ನಾನು "
ಡಿವೈಡರ್"
ಅಂತ
ಜೋರಾಗಿ
ಕಿರುಚುತ್ತಿದ್ದೆ.
ಈಗಲೂ
ಅವಳಿಗೆ
ಡಿವೈಡರ್
ಹತ್ತಿರ
ಹೋಗುವಾಗ
ನನ್ನ
ಮಾತು
ನೆನಪು
ಬರುತ್ತಿರುತ್ತದೆ
ಎನ್ನುತ್ತಿರುತ್ತಾಳೆ :).
ಹಾಗಾದರೂ
ನೆನಪಿದೆಯಲ್ಲ!
ಎನ್ನುವುದೇ
ನನಗಿರುವ
ನೆಮ್ಮದಿ.
ನಾನು
ಅಪಘಾತಗಳ
ಬಗ್ಗೆ
ಬರೆದೆನೆಂದು
ಕೆಲವರ
ಮನ
ನೊಂದಿರಬಹುದು.
ಓದುವವರಿಗೆ
ಎಚ್ಚರ
ಮೂಡಿಸುವುದಷ್ಟೇ
ನನ್ನ
ಈ
ಲೇಖನದ
ಗುರಿ.
ಓದುಗರಿಗೆ ವಾಹನ ತೆಗೆದುಕೊಳ್ಳದಂತೆ ಮಾಡಿ ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಕಂಡಿತಾ ನನ್ನಲ್ಲಿಲ್ಲ.
ಹಾಗೆ ಹೇಳುವುದಾದರೆ,
ನಾವು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗಲೂ ಅಪಘಾತವಾಗಬಹುದು.
ಆದರೆ ಅದೇ ನಮಗೆ ರಸ್ತೆಗೇ ಇಳಿಯದಂತೆ ಮಾಡಬಾರದಲ್ಲವೇ?
ಹೀಗೆ
ಹಗುರವಾಗಿ
ಹೇಳುವುದಾದರೆ
ಮತ್ತೊಂದು
ಮಾತು
ನೆನಪಿಗೆ
ಬರುತ್ತಿದೆ.
ನನ್ನ
ಕೊಲೀಗ್
ಇದ್ದವಳು
ಹೇಳುತ್ತಿದ್ದಳು:
ಸಪೂರವಾಗಿ
ಇರುವವರಿಗೆ
ಅಪಘಾತವಾದಾಗ ಅವರಿಗೆ ಜಾಸ್ತಿ ನೋವಾಗುವುದಂತೆ.
ಅದಕ್ಕೆ ನಾನು ಹೇಳಿದೆ,
ಹಾಗಾದರೆ ದಪ್ಪ ಇರುವುವರಿಗೆ
ಅಪಘಾತವಾದರೆ
ರಸ್ತೆಗೆ
ನೋವಾಗುತ್ತಾ?
ಅಂತ. !!!
"The next time you see a copy of that touching creation, take a second look. Let it be your reminder, if you still need one, that no one - no one - - ever makes it alone!"
ಅವನೊಬ್ಬನಿದ್ದ ಅಲ್ ಬ್ರೆಕ್ಟ್ ಡ್ಯೂರರ್. ವಿಶ್ವದಲ್ಲೇ ತನ್ನ ಚಿತ್ರ ಕಲೆಗೆ ಹೆಸರು ವಾಸಿಯಾಗಿದ್ದ. ಅವನು ಗತಿಸಿ ಹೋಗಿ ಸುಮಾರು ಐನೂರು ವರ್ಷಗಳಾದರೂ ಇಂದಿಗೂ ಅವನ ಕೆಲವು ಕಲೆಗಳು ಮನುಷ್ಯನಿಗೆ ಹತ್ತಿರವಾಗಿವೆ. ಅವನು ರಚಿಸಿರುವ ಹಲವು ಕಲೆಗಳಲ್ಲಿ "Praying Hands" ಹೆಸರುವಾಸಿ.
ನೂರೆಂಬರ್ಗ್ ಪಕ್ಕದ ಹಳ್ಳಿಯೊಂದರಲ್ಲಿ ಜನಿಸಿದ ಆಲ್ಬ್ರೆಕ್ಟ್ ಆವನ ಹೆತ್ತವರ ಹದಿನೆಂಟು ಮಕ್ಕಳಲ್ಲಿ ಒಬ್ಬ. ಅದೊಂದು ದಿನ ಆಲ್ಬ್ರೆಕ್ಟ್ ಮತ್ತು ಅವನ ತಮ್ಮನಿಗೆ ಚಿತ್ರಕಾರರಾಗಬೇಕೆಂಬ ಆಸೆಯಾಯಿತು. ಆದರೆ ಅವರ ಆಸೆಯನ್ನು ಕೈಗೂಡಿಸಲು ಅವರ ಅಪ್ಪನಿಗೆ ಸಾಧ್ಯವಿರಲಿಲ್ಲ. ಇಬ್ಬರಲ್ಲಿ ಒಬ್ಬರು ಪಕ್ಕದಲ್ಲಿಯೇ ಇರುವ ಮೈನಿಂಗ್ ಕಂಪೆನಿಗೆ ಹೋಗಿ ಕೆಲಸ ನಿರ್ವಹಿಸಿ ಮತ್ತೊಬ್ಬನಿಗೆ ಕಲಿಸಲು ಸಹಾಯ ಮಾಡಬೇಕಾಗಿತ್ತು. ಒಬ್ಬ ಕಲಿತ ನಂತರ ಆತ ಇನ್ನೊಬ್ಬನಿಗೆ ಕಲಿಸುವ ಮಾತು ಕೊಟ್ಟಾಗಿತ್ತು. ಇಂತಹ ಸಮಯದಲ್ಲಿ ಯಾರು ಮೊದಲೆಂದು ನಿರ್ಧರಿಸಲು ಅವರಿಬ್ಬರು ಆಯ್ದುಕೊಂಡ ಹಾದಿ "ನಾಣ್ಯ ಚಿಮ್ಮುಗೆ". ವಿಧಿ ಆಲ್ಬ್ರೆಕ್ಟ್ ನಿಗೆ ಚಿತ್ರಕಾರನಾಗುವ ಅವಕಾಶ ನೀಡಿತ್ತು.
ಮುಂದಿನ ನಾಲ್ಕು ವರ್ಷಗಳಲ್ಲಿ ಆಲ್ಬ್ರೆಕ್ಟ್ ತನ್ನ ಚಿತ್ರ ಕಲಿಕೆ ಯನ್ನು ನಡೆಸಿದರೆ, ತಮ್ಮ ಮೈನಿಂಗ್ ಕಂಪೆನಿಯಲ್ಲಿ ಕೆಲಸ ಮಾಡಿ ಅಣ್ಣನಿಗೆ ಓದಿಸುತ್ತಿದ್ದ. ಆಲ್ಬ್ರೆಕ್ಟ್ ನ ಕಲೆಗಳು ಜನ ಜನಿತ ವಾಗುತ್ತಿದ್ದವು. ಕೊನೆಗೊಂದು ದಿನ ಆಲ್ಬ್ರೆಕ್ಟ್ ತಮ್ಮನಿಗೆ ಹೇಳುತ್ತಾನೆ. "ನೀನು ನನ್ನ ದೇವರಂತಹ ತಮ್ಮ. ಈಗ ಕಲಾಕಾರನಾಗುವ ಸರದಿ ನಿನ್ನದು. ಅದಕ್ಕೆ ತಗಲುವ ಎಲ್ಲಾ ಖರ್ಚು ವೆಚ್ಛಗಳನ್ನು ಭರಿಸಲು ನಾನು ಸಿದ್ಧ" ಎಂದು.
ಈ ಮಾತನ್ನು ಕೇಳಿದ ಆಲ್ಬ್ರೆಕ್ಟ್ ನ ತಮ್ಮನಿಗೆ ಅಳು ತಡೆಯದಾಯಿತು. ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ತಡೆದುಕೊಂಡು ಹೇಳುತ್ತಾನೆ " ಅಣ್ಣ, ಇದು ನನ್ನಿಂದ ಆಗದ ಕೆಲಸ. ನನ್ನ ಸಮಯ ಆಗಿ ಬಿಟ್ಟಿದೆ. ನನ್ನ ಕೈಗಳನ್ನೊಮ್ಮೆ ನೋಡು. ಪ್ರತಿ ಬೆರಳಿನ ಮೂಳೆಗೂ ಒಂದಲ್ಲ ಒಂದು ಏಟು ಬಿದ್ದಿದೆ. ಕೈಯ ಚರ್ಮ ಕಿತ್ತು ಹರಿದಿದೆ. ನನ್ನಿಂದ ಒಂದು ಲೋಟವನ್ನು ಸರಿಯಾಗಿ ಅಲುಗಾಡದಂತೆ ಹಿಡಿಯಲಾಗುವುದಿಲ್ಲ. ಕ್ಯಾನ್ವಾಸ್ ನ ಮೇಲೆ ಹೇಗೆ ನಾಜೂಕಿನಿಂದ ಕೆಲಸ ಮಾಡಲಿ ಹೇಳು?. For me it is too late" ಎಂದು.
ಆಲ್ಬ್ರೆಕ್ಟ್ ನ portraits, ಪೆನ್, ಚಿತ್ರಗಳು, ಬೆಳ್ಳಿಯ ಚಿತ್ರಗಳು, ತಾಮ್ರದ ಚಿತ್ರಗಳು, ವಾಟರ್ ಕಲರ್, ಮಸಿ, ಮರದ ತುಂಡುಗಳು ಇತ್ಯಾದಿ ಸುಮಾರು ಐನೂರು ವರುಷಗಳು ಕಳೆದರೂ ಇಂದಿಗೂ ವಿಶ್ವದ ಹಲವು ಸಂಗ್ರಹಾಲಯಗಳಲ್ಲಿವೆ. ಹಲವು ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ರವಿ ವರ್ಮನ ಚಿತ್ರಗಳ ಹಾಗೆ ಮನೆ, ಆಫೀಸಿನ ಕೋಣೆಯಲ್ಲಿ ಈತನ ಕಲೆಗಳನ್ನು ನೇತು ಹಾಕಿದ್ದಾರೆ. ಒಂದು ದಿನ ತನ್ನ ತಮ್ಮ ಮಾಡಿದ ತ್ಯಾಗ ಮತ್ತು ತೋರಿಸಿದ ಪ್ರೀತಿಗಾಗಿ ತನ್ನ ತಮ್ಮನ ಕೈಗಳನ್ನು ಪ್ರಾರ್ಥಿಸುವ ರೂಪದಲ್ಲಿ ಬರೆದು "Hands" ಎನ್ನುವ ಹೆಸರಿಡುತ್ತಾನೆ ಆಲ್ಬ್ರೆಕ್ಟ್. ಆ ಕೈ ಮತ್ತು ಅದರ ಹಿಂದಿನ ಕಥೆಯನ್ನು ಕೇಳಿದ ಜನ "Praying Hands" ಎನ್ನುವ ಹೆಸರಿಡುತ್ತಾರೆ.
ಆಲ್ಬ್ರೆಕ್ಟ್ ನ ತಮ್ಮ ನಮಗೆ ನಿಮಗೆಲ್ಲರಿಗೂ ತ್ಯಾಗ ಮತ್ತು ಪ್ರೀತಿಗೊಂದು ಆದರ್ಶ. ಇಂದು ಅವನ ತಮ್ಮನ ಹೆಸರು ತಿಳಿದವರು ಕಡಿಮೆ. ಕೆಲವರು ಆಲ್ಬರ್ಟ್ ಎನ್ನುತ್ತಾರೆ. ಇನ್ನು ಕೆಲವರು ಇನ್ನೇನೋ ಹೇಳುತ್ತಾರೆ. ಆದರೆ ಅವನು ಮಾಡಿದ ತ್ಯಾಗ ಮತ್ತು ನೀಡಿದ ಪ್ರೀತಿ "Praying Hands" ಆಗಿ ಇಂದಿಗೂ ವಿಶ್ವದ ಮುಂದಿದೆ.
“Let us rise up and be thankful, for if we didn't learn a lot today, at least we learned a little, and if we didn't learn a little, at least we didn't get sick, and if we got sick, at least we didn't die; so, let us all be thankful.” – Buddha.ಇತ್ತೀಚೆಗೆ ನನಗೆ ಕೆಲಸ ಕಡಿಮೆಯಿದ್ದಾಗ ನನ್ನ ಕೆಲಸಕ್ಕೆ ರಜೆ ಹಾಕಿ ಮನೆ ಕಡೆ ಹೆಜ್ಜೆ ಹಾಕಿದ್ದೆ. ನಮ್ಮ ಮನೆಗೆ ಇತ್ತೀಚೆಗೆ ಕರೆಂಟ್ ಹಾಕಿಸಲಾಗಿದೆ. ಆದ್ದರಿಂದ ನೋಡಲು ಇರುವುದು ಬರಿ ಬೆಳಕು ಮಾತ್ರ. ಟಿ.ವಿ. ತನ್ನ ಅಟ್ಟಹಾಸವನ್ನು ಪ್ರಾರಂಭಿಸಬೇಕಷ್ಟೆ. ಹಾಗಾಗಿ ನಾನು ಏನಾದರೂ ನನ್ನ ಸಮಯವನ್ನು ಕೊಲ್ಲಲು ಬಳಸುವ ದಾರಿ ಎಂದರೆ ತೋಟದ ಕಡೆಗೆ ಹೋಗುವುದು. ಅಡಿಕೆ ಮರಗಳು ಹೇಗಿವೆ? ಯಾವಾಗ ನೀರು ಹಾಕಬಹುದು? ಅಡಿಕೆ ಹಣ್ಣಾಗಿದೆಯೆ? ಹುಲ್ಲು ಜಾಸ್ತಿ ಬೆಳೆದಿದ್ದರೆ ಕಡಿಸಲು ಜನ ತರಿಸಿದರೆ ಹೇಗೆ? ಎಷ್ಟು ಖರ್ಚಾಗಬಹುದು? ಬಾಳೆಗಿಡದಲ್ಲಿ ಬಾಳೆ ಕಾಯಿ ಬೆಳೆದಿದೆಯೇ? ಹೀಗೆ ಸಾಗುತ್ತಿರುತ್ತದೆ ನನ್ನ ಯೋಚನಾ ಲಹರಿ.
ಅಡಿಕೆ ಮರ ಅಂದಾಗ ನನ್ನ ಗೆಳೆಯರ ಕಿವಿ ನೆಟ್ಟಗಾಗುತ್ತದೆ. ಹೇಯ್ ಸಾಹುಕಾರ! ಎಷ್ಟು ಎಕರೆ ಇದೆ ತೋಟ? ಎನ್ನುತ್ತಾರೆ. ಆದರೆ ಹೆಚ್ಚಿನವರಿಗೆ ಗೊತ್ತಿರದ ಮತ್ತು ಅಡಿಕೆ ಬೆಳೆಗಾರರಿಗಷ್ಟೆ ಗೊತ್ತಿರುವ ಒಂದು ವಿಷಯವಿದೆ. ಅದೆಂದರೆ, ಕೆಲಸಗಾರರ ಸಮಸ್ಯೆ. ಇತ್ತೀಚೆಗೆ ಪ್ರತಿ ಯುವಕನಿಗೂ ನೀಲಿ ಕಾಲರಿನ ಕೆಲಸ ಬೇಡ. ಗಾಡಿ ದೂಡುವ ಕೆಲಸ ಇದ್ದರೂ ಸರಿ, ಸಂಬಳ ಕಡಿಮೆಯಾದರೂ ಸರಿ, ಪೇಟೆ ಸೇರಿಕೊಂಡು ಬಿಡುತ್ತಾರೆ. ಇವತ್ತು ನಮ್ಮ ಮನೆಯಲ್ಲಿರುವುದು ಕೂಡ ಮುದುಕರಾದ ಅಪ್ಪ ಮತ್ತು ದೊಡ್ಡಪ್ಪ. ನಮ್ಮ ಊರಿನ ಯಾವುದೆ ಮೂಲೆಗೆ ಹೋದರೂ ಯುವಕರಿರುವ ಒಂದೈದು ಮನೆಗಳು ಸಿಗಬಹುದು. ಉಳಿದೆಲ್ಲ ಮನೆಗಳದೂ ಅದೇ ರಾಗ. ಇದಕ್ಕೆ ಗ್ಲೋಬಲೈಸೇಷನ್ ನ ಶಾಪ ಏನಾದರೂ ಬಿದ್ದಿರಬಹುದಾ? ಎಂದು ಕೆಲವು ಸಲ ಯೋಚಿಸುತ್ತೇನೆ. ಸಾಮಾನ್ಯ ಕೆಲಸಕ್ಕೆ ಯಾರಾದರೂ ಸಿಗಬಹುದು. ಆದರೆ ಮರ ಹತ್ತುವಂತಹ ಕೆಲಸಕ್ಕೆ ಜನವೇ ಸಿಗುವುದಿಲ್ಲ. ಹಾಗಾಗಿ ಹಿಂದೊಮ್ಮೆ ಸಲ ಹೋದಾಗ ಇಡೀ ದಿನ ದೋಂಟಿ(ಬಿದಿರಿನ ದೊಡ್ಡದಾದ ಕೋಲು) ಹಿಡಿದು ಅಡಿಕೆ ಕೊಯ್ದಿದ್ದೆ. ಹೆಕ್ಕುವುದು ಮತ್ತು ಹೊರುವುದಕ್ಕೆ ಅಪ್ಪ ನೆರವಾಗಿದ್ದರು. ಆದರೆ ಈ ಸಲ ಊರಿಗೆ ಹೋದಾಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದೆ. ಅದೇ ಅಡಿಕೆ ಮರ ಹತ್ತುವುದು !
ಅಯ್ಯೋ ಅಡಿಕೆ ಮರ ಹತ್ತುವುದೇನು ದೊಡ್ಡ ವಿಷಯ? ಎಂದು ಹಲವರು ಮೂಗು ಮುರಿಯಬಹುದು. ಆದರೆ ಹತ್ತಿದವನಿಗೆ ಮಾತ್ರ ಗೊತ್ತು ಅದರ ಕರ್ಮ !. ನೀವು ಒಂದು ಮೀಟರ್ ಹತ್ತಿದಾಗ “ಉಸ್ಸಪ್ಪಾ!” ಅನ್ನುತ್ತೀರ. ಎರಡನೇ ಮೀಟರ್ ಗೆ “ಅಯ್ಯಪ್ಪಾ!” ಆಗುತ್ತದೆ. 4 ಮೀಟರ್ ಹತ್ತುವಷ್ಟರ ವೇಳೆಗೆ “ಹರೋ ಹರ” ವಾಗುತ್ತೀರ. ಯಾಕೆಂದರೆ, ಮರ ಹಿಡಿದುಕೊಂಡ ಕೈ ನೋಯಲು ಶುರುವಾಗುತ್ತದೆ. ಹತ್ತಿದ ಕಾಲು ಶಕ್ತಿಯಿಲ್ಲದೆ ನಡುಗಲು ಶುರುವಾಗುತ್ತದೆ. ಅಲ್ಲಿಗೆ ನಿಮ್ಮದು “ತ್ರಿಶಂಕು ಸ್ವರ್ಗ”. ಆ ಕಡೆ ಮೇಲೆಯೂ ಹೋಗಲಾಗುವುದಿಲ್ಲ ಕೆಳಗೂ ಬರಲಾರಿರಿ ಅಂಥದೊಂದು ಅನುಭವ. ಇಂಥ ಅನುಭವ ನನಗೆ ಸಣ್ಣವನಿರುವಾಗಲೇ ಇತ್ತು. ಆದುದರಿಂದ ಸರಿಯಾದ ಪರಿಕರಗಳನ್ನು ಹಿಡಿದುಕೊಂಡೇ ಹೊರಟಿದ್ದೆ. ಮರ ಹತ್ತುವುದಕ್ಕೆ ಸಹಕಾರಿಯಾಗಲು ಹಗ್ಗವನ್ನು ಸಣ್ಣದಾಗಿ ಕಟ್ಟಿ ಕಾಲಿಗೆ ಹಾಕಿಕೊಳ್ಳುತ್ತೇವೆ. ಇದಕ್ಕೆ “ತಳೆ” ಎನ್ನುತ್ತಾರೆ. ಇನ್ನೊಂದು ಪರಿಕರವೆಂದರೆ ಮರದ ಮೇಲೆ ನೇತಾಡಿಕೊಂಡು ಕೂರಲು “ಮಣೆ”. ನಾನು ಅಡಿಕೆ ತೆಗೆಯಲು ಸುಮಾರು 20 ಅಡಿ ಎತ್ತರ ಹತ್ತಬೇಕಿತ್ತು. ಸರಿ, ಹತ್ತಲು ರೆಡಿಯಾದೆ. ಕಾಲಲ್ಲಿ ತಳೆ, ಎಡ ಹೆಗಲಲ್ಲಿ ಮಣೆ, ಬಲಗೈನಲ್ಲಿ ದೋಂಟಿ ಹಿಡಿದು ಹತ್ತತೊಡಗಿದೆ. ಹತ್ತುವಾಗ ನನಗೊಂದು ಗುರಿಯಿತ್ತು. ಅದೆಂದರೆ, ನಾನು ಹರೋಹರ ಅನ್ನುವಷ್ಟರ ಒಳಗೆ ಮಣೆ ಹಾಕಿ ಕೂತುಬಿಡಬೇಕು. ಹಾಗೆಯೇ ಆಯಿತು ಬಿಡಿ, ಮಣೆ ಹಾಕಿ ಕೂರೂವುದೇನೋ ಕೂತುಬಿಟ್ಟೆ. ಆದರೆ ಕಾಲು ಐದು ನಿಮಿಷವಾದರೂ ನಡುಗುವುದನ್ನು ನಿಲ್ಲಿಸಲಿಲ್ಲ. ಜೊತೆಗೆ ದೇಹ ಕೂಡ ಸಹಕರಿಸುವುದನ್ನು ಕೈ ಕೊಟ್ಟಿತು. ಸುಮ್ಮನೆ ಮರದ ಮೇಲೆಯೆ ಕುಳಿತೆ. ಅಲ್ಲಿಂದ ಸುತ್ತಲಿರುವ ಒಂದೈದು ಮರಗಳ ಅಡಿಕೆಯನ್ನೇನೋ ತೆಗೆದೆ. ಆದರೆ ಇಳಿಯುವಷ್ಟರ ಹೊತ್ತಿಗೆ ನನ್ನಲ್ಲಿದ್ದ ಅಡಿಕೆ ತೆಗೆಯಬಹುದೆನ್ನುವ ಆತ್ಮ ವಿಶ್ವಾಸ ಉಡುಗಿ ಹೋಗಿತ್ತು. ಕೊನೆಗೆ ಅಡಿಕೆ ಹೆಕ್ಕುತ್ತಿರುವಾಗ ಸ್ವಲ್ಪ ಬೇಲಿಯ ಪಕ್ಕ ಚಲನೆಯಾಯಿತು. ಅಪ್ಪ ಏನಾದರೂ ಬಂದು “ನಾನು ಹೆಕ್ಕುತ್ತೇನೆ, ನೀನು ಹತ್ತು ಅಂದರೆ ನನ್ನ ಮಾನ ಮರ್ಯಾದೆ ಹೋದಂತೆ” ಎಂದು ಯೋಚಿಸಿ ನಿಂತಲ್ಲೆ ನಿಂತೆ. ಅದು ಪಕ್ಕದ ಮನೆಯ ದನ ಆಗಿತ್ತು. ಹೆಕ್ಕುವುದನ್ನು ಮುಂದುವರಿಸಿದ ನನ್ನ ತಲೆ ಇದಕ್ಕೊಂದು ಗಾದೆ ಹುಡುಕಿದರೆ ಹೇಗೆ? ಅಂತ ಯೋಚಿಸತೊಡಗಿತು. ಬಂತು ನೋಡಿ ಒಂದು ಗಾದೆ; “ಹತ್ತುವವನಿಗಿಂತ ಹೆಕ್ಕುವವನೇ ಬುದ್ದಿವಂತ” ಅಂತ.
ಇನ್ನೇನು ಕೊನೆಯ ಅಡಿಕೆ ಹೆಕ್ಕಬೇಕು ಅನ್ನುವಷ್ಟರಲ್ಲಿ ನನ್ನಲ್ಲಿ ಮತ್ತೆ ಕುದುರಿತು ನೋಡಿ ಹುಚ್ಚು ವಿಶ್ವಾಸ. “ಭಲೇ ಮಗನೆ! ಒಂದು ಮರ ಹತ್ತಿದ್ದೀಯ ಭೇಷ್,” ಎಂದಿತು ಮನಸ್ಸಿನ ಒಂದು ಮೂಲೆ. ಸುಮ್ಮನಿದ್ದ ಇನ್ನೊಂದು ಮೂಲೆ ಈಗಷ್ಟೆ ಮೊದಲ project ಮುಗಿಸಿದವನು I am experienced ಅಂದ ಹಾಗೆ ಮಗನೆ, ಇನ್ನೊಂದಕ್ಕೆ ಹತ್ತು ಎಂದು ಪ್ರೇರಿಪಿಸತೊಡಗಿತ್ತು. ಅದಕ್ಕೆ ಹೇಳುವುದು ನಮ್ಮ ಮನಸ್ಸು ನಮಗೆ ಒಂದು ಗೆಳೆಯನಿದ್ದಂತೆ, ಅಂತ. ಪ್ರತಿ ಕ್ಷಣದಲ್ಲೂ ಒಂದು ಸಾತ್ವಿಕ ಹಠವನ್ನು ನನ್ನ ಮನಸ್ಸು ನನಗೆ ಕೊಡುತ್ತಲೇ ಇರುತ್ತದೆ. ಇನ್ನೂ ಸ್ವಲ್ಪ ಹೆಚ್ಚು ಸಿದ್ದತೆ ಮಾಡಿ ಎರಡನೆ ಮರ ಹತ್ತಿದೆ. ನಾನು ಮರದಲ್ಲಿ ಕೂತಿರುವುದನ್ನು ನೋಡಿ ಪಕ್ಕದ ಮನೆ ಹುಡುಗಿ ಕಿಸಕ್ಕೆಂದು ನಕ್ಕು ಓಡಿ ಹೋದಳು. “ಚೆಡ್ಡಿ ಹಾಕಿದ್ದೇನೆ ಗೊತ್ತಾಯ್ತಾ?” ಎಂದು ರೇಗಿಸುವ ಮನಸ್ಸಾದರೂ, ಸಮಯ, ಸಂದರ್ಭ ಸರಿ ಇಲ್ಲವೆಂದು ಸುಮ್ಮನಾದೆ. ಹಾಗೆ ಕುಳಿತಲ್ಲಿಯೇ, ನನ್ನ ಸಾಧನೆಗಳಿಗೆ ನಕ್ಕವರಲ್ಲಿ ಇವಳು ಎಷ್ಟನೆಯವಳಿರಬಹುದೆಂದು ಲೆಕ್ಕ ಹಾಕುವ ಮನಸ್ಸು ಮಾಡಿದೆ. ಲೆಕ್ಕ ಸಿಗಲಿಲ್ಲ. ಮನದ ಮೂಲೆಯಿಂದೊಂದು ಮಾತು ಬಂದಿತ್ತು, “ ನನ್ನ ಸಾಧನೆಗಳಿಗೆ ನಕ್ಕವರಲ್ಲಿ ನೀನು ಮೊದಲಿಗಳೂ ಅಲ್ಲ; ಕೊನೆಯವಳೂ ಅಲ್ಲ. ಇನ್ನು ಕೆಲವು ದಿನ ಅಷ್ಟೆ, ಮರ ಹತ್ತಲು ಕಲಿತು expert ಆಗುತ್ತೇನೆ” ಎಂದಿತು ಮನಸ್ಸು. ಕೊನೆಗೆ ಸಾಕು ಎನ್ನಿಸಿ ಅಲ್ಲಿಂದ ಕಾಲು ಕಿತ್ತ ನಾನು ಸಾಯಂಕಾಲ ಒಂದೈದು ಮರ ಹತ್ತಿ ಇಳಿದೆ.
Expert ಎಂದಾಗ ನನ್ನ ಯೋಚನಾ ಲಹರಿ ಬದಲಾಯಿತು. ಯಾವುದೇ ಕ್ಷೇತ್ರದಲ್ಲಿ ಇವನು expert ಅಂದರೆ ಆ ಕ್ಷೇತ್ರ ಹೆಚ್ಚಿನವರಿಗೆ ಗೊತ್ತಿರುತ್ತದೆ. ಜನ ಸಾಮಾನ್ಯರಿಗೆ ನಿಲುಕದ ಕ್ಷೇತ್ರ ಎಂದರೆ ಅದು “ಐಟಿ”. ನಾನು ಇಂಜಿನಿಯರಿಂಗ್ ಮಾಡುತ್ತಿರುವಾಗ ಒಬ್ಬಾತ ನನಗೆ ಹೇಳುತ್ತಿದ್ದ. “ಕಂಪ್ಯೂಟರ್ ನವರಿಗೆ ಕಾಮನ್ ಸೆನ್ಸ್ ಇಲ್ಲ” ಎಂಬುವುದು ಅವನ ವಾದ. ಆಗ ಸಿಟ್ಟಿನಿಂದ ಅವನಿಗೆ, “ಕಂಪ್ಯೂಟರ್ ಗೊತ್ತಿರುವ ನನಗೆ ಕಾಮನ್ ಸೆನ್ಸ್ ಇಲ್ಲದಿದ್ದರೆ ಏನಾಯ್ತು? ನಿನಗೆ ಇದ್ದರೆ ಸಾಕು !” ಎಂದಿದ್ದೆ. ಆದರೆ ಇತ್ತೀಚೆಗೆ ಅವನ ಮಾತು ಸತ್ಯ ಇರಬಹುದು ಎನಿಸುತ್ತದೆ. ಏಕೆಂದರೆ, ನಮ್ಮದು ಅಂತಿಂಥ ವಾದವಲ್ಲ; ನಮ್ಮಲ್ಲಿರುವುದು “ಪಲಾಯನ” ವಾದ. ನೀವು ಅಡಿಕೆ ಮರ ಹತ್ತುವವನಲ್ಲಿ ಮಾತನಾಡಿದ್ದರೆ ಅವನಿಗೆ ಅದರಲ್ಲಿ ಎಲ್ಲ ವಿಷಯಗಳೂ ತಿಳಿದಿರುತ್ತವೆ. ಅದೇ ಸಾಫ್ಟ್ ವೇರ್ ಇಂಜಿನಿಯರ್ ಗಳ ವಿಷಯಕ್ಕೆ ಬಂದರೆ, “ಏನು ಕೆಲಸ ಸಾರ್?” ಎಂದರೆ, “ಕಂಪ್ಯೂಟರ್ ಇಂಜಿನಿಯರ್” ಎನ್ನುತ್ತಾರೆ. “ಮನೆಯಲ್ಲಿ ಒಂದು ಕಂಪ್ಯೂಟರ್ ಕೆಟ್ಟಿದೆ, ರಿಪೇರಿ ಮಾಡಿಕೊಡಬಹುದಾ?” ಎಂದರೆ “ನನ್ನದು ಸಾಫ್ಟ್ ವೇರ್” ಎನ್ನುತ್ತಾರೆ. “ಸರಿ ಅದಾದರೂ ಮಾಡಪ್ಪ” ಎಂದರೆ “ನನ್ನದು ಮಿಡಲ್ ವೇರ್/user interface” ಎನ್ನುತ್ತಾರೆ. “ಅದೇ ಮಾಡು” ಎಂದರೆ “ಅದರಲ್ಲಿ ಇದನ್ನು ಮಾಡಿದ್ದೇನೆ” ಎನ್ನುವ ಮಾತು. ಅದನ್ನು ನೋಡಿದರೆ ಯಾರಾದರೂ ಮನೆ ಕಟ್ಟುತ್ತಿದ್ದಾಗ ಬಂದು ಸೊಳ್ಳೆ ಹೊಡೆದು, ಮನೆ ನನ್ನದೇ ಎನ್ನುವವರ ಹಾಗೆ ಇದು ಎಂದನಿಸದೆ ಇರದು. ನಿಜವಾಗಿಯೂ ಇದು common sense ಗೆ ನಿಲುಕುವ ವಿಷಯವೇ ಅಲ್ಲ ಬಿಡಿ.
ಅವತ್ತು ಸಾಯಂಕಾಲ ನನ್ನ ಪಕ್ಕದ ಮನೆಯ ಹಿರಿಯರೊಡನೆ ಅಡಿಕೆ ಮರ ಹತ್ತಿದ ವಿಷಯವನ್ನು ಹೆಮ್ಮೆಯಿಂದ ಹೇಳಿದೆ. “ಯಾಕೆ ಬೇಕು ನಿನಗೆ?” ಅಂತ ರೇಗಿದರು. ನೋಡಿದರೆ, ಅವರು ಕೂಡ ಇತ್ತೀಚೆಗೆ ಏಣಿ ಏರಿ ಅಡಿಕೆ ಕೊಯ್ಯಲು ಪ್ರಯತ್ನಿಸಿದ್ದರಂತೆ. ಎಳೆಯಲು ಹೋಗಿ ಬಿದ್ದಂತಾಯಿತಂತೆ. ಅದಕ್ಕೆ ಅಲ್ಲೇ ಬಿಟ್ಟು ಹೊರಟು ಬಂದರಂತೆ. ಹೀಗೆ ಸಾಗುತ್ತದೆ ಕಥೆ. ಕಂಪೆನಿಗಳಲ್ಲಿ ಕಲಿಯುವುದರ ಬಗ್ಗೆ ಭಾಷಣ ಬಿಗಿಯುವವರಿಗೆ ನನ್ನ ಹೊಸ ಕಲಿಕೆ ವಿಚಿತ್ರ ಎನಿಸಬಹುದು. ಆದರೆ ಜೀವನ ಎಂದರೆ ಒಂದು ಕಲಿಕೆ. ಇಲ್ಲಿ ಕಲಿತವನು ಗೆಲ್ಲುತ್ತಾನೆ. ಕಲಿಕೆಗೆ ಮನಸ್ಸಿದ್ದರೆ ಸಾಲದು, ಅದನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮತ್ತು ಸಾತ್ವಿಕ ಛಲ ಇರಬೇಕು. ಬಹುಶ: ನಾವು ಕಲಿಯಲು ಪ್ರಾರಂಭಿಸುವುದು ನಮ್ಮ ಬುಡ ತನಕ ನೀರು ತುಂಬಿದಾಗ ಮಾತ್ರ ಅನಿಸುತ್ತದೆ. ಎಲ್ಲ ಮುಗಿದು ನಾವು ಕಲಿಯಬೇಕೆನಿಸಿದ್ದನ್ನು ಸಾಧಿಸಿದಾಗ ನಾವು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೇವೆ. ನಮ್ಮನ್ನು ನೋಡಿ ನಕ್ಕಾತ ತನ್ನ ಕೆಲಸದೊಂದಿಗೆ ಅಸಹಾಯನಾಗಿ ಕೂತಿರುತ್ತಾನೆ. ಕೊನೆಗೆ, ಒಂದು ವೇಳೆ ಬರುವ ವರ್ಷ ಯಾರಾದರೂ ಹತ್ತುವವರು ಸಿಕ್ಕಿದ್ದರೆ ಹೇಗೆ? ಎನ್ನುವ ಆಸೆಯೂ ಮೊಳೆಯಿತು. ಆಗ ನನ್ನ ಮನಸ್ಸಿಗೆ ಥಟ್! ಅಂತ ಬಂದ ಯೋಚನೆ, “ಅವನಿಗೆ ಒಳ್ಳೆಯ ಅಪ್ರೈಸಲ್ಲು ಕೊಡಬೇಕು” ಅಂತ. ಹಾಗೆಯೇ ಒಂದೈದು ಮರ ಹತ್ತಲು ನೆರವಾದ ಕೈ ನೋಡಿದಾಗ, ಮರ ತಾಗಿ ತಾಗಿ ಗೀರು ಬಿದ್ದ ಕೈ ರಕ್ತ ಸಿಕ್ತವಾಗಿತ್ತು.